ಕುಮಾರಿ ಚೈತ್ರಾ, ಕುಂದಾಪುರ ಇವರ ಜೊತೆ ಶುಕ್ರವಾರ ಬೆಳಿಗ್ಗೆ 11ಕ್ಕೆ ಮಹಿಳೆಯರ ಜೊತೆ ಸಂವಾದ. ಸಂಜೆ ಭಾರತ ಮಾತಾ ಪೂಜಾ ಕಾರ್ಯಕ್ರಮ




ನಗರದ ದೇವರಾಜ ನಗರದಲ್ಲಿರುವ ಆಶಾಕಿರಣ ಯುವಕರ ಸಂಘ, ಹಿಂದೂ ಜಾಗರಣ ವೇದಿಕೆ ಮತ್ತು ಬಜರಂಗದಳ ಇವರ ವತಿಯಿಂದ ದಿನಾಂಕ 27-7-2018 ರ ಶುಕ್ರವಾರ ಬೆಳಿಗ್ಗೆ 11ಕ್ಕೆ ಮಹಿಳೆಯರ ಜೊತೆ ಸಂವಾದ ಕಾರ್ಯಕ್ರಮ ಏರ್ಪಡಿಸಲಾಗಿದೆ, ಸ್ಥಳ: ಶ್ರೀಮತಿ ದಾಕ್ಷಾಯಿಣಿಯವರ ಸ್ವಗೃಹ, ಮಾಂಗಲ್ಯ ಕಲ್ಯಾಣ ಮಂಟಪ ರಸ್ತೆ, ಆಸಕ್ತ ಮಹಿಳೆಯರು ಆಗಮಿಸಬೇಕೆಂದು ಕೋರಲಾಗಿದೆ. ಸಂಜೆ 6 ಘಂಟೆಗೆ ಪದ್ಮಶಾಲಿ ಕಲ್ಯಾಣ ಮಂದಿರದ ಪಕ್ಕದಲ್ಲಿರುವ ಮೈದಾನದಲ್ಲಿ ಗುರು ಪೌರ್ಣಿಮೆ ಪ್ರಯುಕ್ತ ಭಾರತ ಮಾತಾ ಪೂಜಾ ಕಾರ್ಯಕ್ರಮ ಏರ್ಪಡಿಸಲಾಗಿದೆ, ದಿವ್ಯ ಸಾನಿಧ್ಯವನ್ನು ಖಾನಿಮಠಾಧ್ಯಕ್ಷರಾದ ಶ್ರೀ ನಿ|| ಪ್ರ|| ಸ್ವ|| ವಿದ್ವಾನ್ ಬಸವರಾಜ ಸ್ವಾಮೀಜಿಯವರು ವಹಿಸಲಿದ್ದಾರೆ, ಪ್ರಮುಖ ಭಾಷಣಾಕಾರರಾಗಿ ಚೈತ್ರಾ ಕುಂದಾಪುರ, ಹಿಂದೂ ಕಾರ್ಯಕರ್ತೆ, ಆಗಮಿಸುತ್ತಿದ್ದಾರೆ, ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಿ.ಗಂಗಾದರಯ್ಯ ವಹಿಸಲಿದ್ದಾರೆ, ಎಲ್ಲಾ ದೇಶ ಭಕ್ತ ಅಭಿಮಾನಿಗಳು, ಸಾರ್ವಜನಿಕರು ಆಗಮಿಸಬೇಕೆಂದು ಆಯೋಜಕರು ವಿನಂತಿಸಿದ್ದಾರೆ.
For details Dakshayini: 9110250697
Comments