ವಿಜೃಂಭಣೆಯಿಂದ ನಡೆದ ದ್ರೌಪದಾದೇವಿ ಕರಗ ಮಹೋತ್ಸವ

30 Apr 2018 8:42 AM |
1131 Report

ನಗರದ ಚಿಕ್ಕಪೇಟೆಯಲ್ಲಿರುವ ಶ್ರೀ ಧರ್ಮರಾಯಸ್ವಾಮಿ ದೇವಾಲಯದಲ್ಲಿ ಶ್ರೀ ಆದಿಶಕ್ತ್ಯಾತ್ಮಕ ದ್ರೌಪದಿ ದೇವಿ ಕರಗ ಮಹೋತ್ಸವ ಭಾನುವಾರ ನಡೆಯಿತು, ಇದರ ಅಂಗವಾಗಿ ವಿವಿಧ ಧಾರ್ಮಿಕ ಆಚರಣೆಗಳು ಬೆಳಿಗ್ಗೆ 8-30 ರಿಂದ ಮುತ್ಯಾಲಮ್ಮ ದೇವಸ್ಥಾನದಲ್ಲಿ ವಿಶೇಷ ಪೂಜೆ, 10 ರಿಂದ 12 ಶ್ರೀ ಲಲಿತಾ ಹೋಮ, ಮಧ್ಯಾನ್ಹ 1 ರಿಂದ 2 ರವರೆಗೆ ಕಲ್ಯಾಣೋತ್ಸವ ನಡೆಸಲಾಯಿತು, ಮಧ್ಯ ರಾತ್ರಿ 12.30ಕ್ಕೆ ಬೇತಮಂಗಲದ ಪೂಜಾರಿ ಬಿ.ವೈ. ರಾಮಚಂದ್ರಪ್ಪ ಕರಗ ಹೊತ್ತು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸಿದರು. ಕರಗದ ಪ್ರಯುಕ್ತ ಪ್ರಮುಖ ದೇವಸ್ಥಾನಗಳಲ್ಲಿ ವಿಶೇಷ ಅಲಂಕಾರ ಪೂಜೆ ಹಾಗೂ ರಾತ್ರಿ ದೇವರುಗಳ ಮೆರವಣಿಗೆಯನ್ನು ಎರ್ಪಡಿಸಿದ್ದರು.

Edited By

Ramesh

Reported By

Ramesh

Comments