ವೀರಭದ್ರನಪಾಳ್ಯಾದಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡ ಯುವಕರು






ವೀರಭದ್ರನ ಪಾಳ್ಯಾದಲ್ಲಿ ಸೇರ್ಪಡಾ ಕಾರ್ಯಕ್ರಮದಲ್ಲಿ ವಿದ್ಯಾವಂತ ಯುವಕರು ಕಾಂಗ್ರೆಸ್ ಪಕ್ಷವನ್ನು ಸೇರಲು ಸುಮಾರು ದಿನಗಳಿಂದ ಕಾದಿದ್ದರು...ಕಾರಣ 15 ವರ್ಷದಿಂದ ಕಾಣದ ಅಭಿವೃದ್ಧಿ ಕೆಲಸಗಳು 5 ವರ್ಷದಲ್ಲಿ ಆಗಿರುವುದರಿಂದ ಶಾಸಕರಿಗೆ ಕೃತಜ್ಞತೆ ಸಲ್ಲಿಸಿ 26/3/2017 ರಂದು ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಗೊಂಡರು. ಕಾರ್ಯಕ್ರಮವನ್ನು ವಾರ್ಡಿನ ನಾಮಿನಿ ಸದಸ್ಯರಾದ ಅಂಜಿನಮೂರ್ತಿ ಆಯೋಜಿಸಿದ್ದರು, ಕಾರ್ಯಕ್ರಮದಲ್ಲಿ ಶಾಸಕರಾದ ಟಿ. ವೆಂಕಟರಮಣನಯ್ಯರವರು ಅದ್ಯಕ್ಷತೆ ವಹಿಸಿದ್ದರು, ಕೆ.ಪಿ.ಸಿ.ಸಿ.ಸದಸ್ಯರಾದ ಎಂ.ಜಿ.ಶ್ರೀನಿವಾಸ್, ರಂಗರಾಜು, ನಗರ ಬ್ಲಾಕ್ ಅಧ್ಯಕ್ಷರಾದ ಅಶೋಕ, ನಗರಸಭಾ ಸದಸ್ಯರಾದ ಲೋಕೇಶ್ ಬಾಬು, ಎಸ್ಸಿ.ಕಾಂಗ್ರೆಸ್ ಅಧ್ಯಕ್ಷರಾದ ಮುನಿರಾಜು, ದರ್ಗಪುರದ ಎಸ್ಸಿ.ಉಪಾಧ್ಯಕ್ಷರಾದ ಅಶ್ವಥ್, ಹಿಂದುಳಿದ ವರ್ಗದ ಅಧ್ಯಕ್ಷರಾದ ಪು.ಮಹೇಶ್ ಹಾಗೂ ಬಷೀರ್, ನಗರ ಎಸ್ಸಿ.ಪ್ರದಾನ ಕಾರ್ಯದರ್ಶಿ ಮುನಿರಾಜು, ಹಾಗೂ ಬ್ಲಾಕ್ ಕಾಂಗ್ರೆಸ್ ಕಾರ್ಯಕಾರಿ ಸಮಿತಿಯ ಭವಾನಿ, ಬಾಬು, ರಾಮಾಂಜಿನಪ್ಪ, ಮಂಜುನಾಥ, ದೊಡ್ಡಯ್ಯ, ಯುವ ಘಟಕದ ಅಧ್ಯಕ್ಷರಾದ ರಾಜೇಶ್ ಉಪಸ್ತಿತರಿದ್ದರು.
Comments