ಮೈಸೂರು ಅರಸರ ಆಡಳಿತದ ಬಗ್ಗೆ ಮಾತನಾಡಿದ ಸಿದ್ದು ಗೆ ಎಚ್ ಡಿಕೆ ಟಾಂಗ್



ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮೈಸೂರು ಅರಸರ ಆಡಳಿತದ ವೇಳೆ ಜನಿಸಿರಲೇ ಇಲ್ಲ. ಮೈಸೂರು ಅರಸರ ಆಡಳಿತದ ಜತೆ ತಮ್ಮ ಆಡಳಿತವನ್ನು ಹೋಲಿಕೆ ಮಾಡಿಕೊಳ್ಳುವ ಅವರಿಗೆ ಹುಚ್ಚು ಹಿಡಿದಿದೆ' ಎಂದು ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್.ಡಿ. ಕುಮಾರಸ್ವಾಮಿ ಟೀಕಿಸಿದರು.
ಮೈಸೂರು ಸಂಸ್ಥಾನದ ನಂತರ ಅತೀ ಹೆಚ್ಚು ಕೆಲಸ ಮಾಡಲಾಗಿರುವುದು ಈಗಿನ ಕಾಂಗ್ರೆಸ್ ಸರ್ಕಾರದ ಅವಧಿಯಲ್ಲಿ ಎಂಬ ಸಿದ್ದರಾಮಯ್ಯ ಹೇಳಿಕೆಗೆ ಅವರು ಪ್ರತಿಕ್ರಿಯಿಸಿದ ಎಚ್.ಡಿ.ಕುಮಾರಸ್ವಾಮಿ ಯವರು, ಸಂವಿಧಾನ ರಚನೆಯಾಗದೇ ಇದ್ದ ಕಾಲದಲ್ಲಿ ಮೀಸಲಾತಿ ತಂದ ಮೈಸೂರು ಅರಸರ ಆಡಳಿತಕ್ಕೆ ಸಿದ್ದರಾಮಯ್ಯ ಆಡಳಿತದ ಹೋಲಿಕೆಯೇ?' ಎಂದು ಪ್ರಶ್ನಿಸಿದರು.ನೀರಾವರಿ, ವಿದ್ಯುತ್ ಕ್ಷೇತ್ರಕ್ಕೆ ಮೈಸೂರು ಅರಸರ ಕೊಡುಗೆ ಅನುಪಮವಾಗಿದೆ. ಅವರ ಆಡಳಿತಕ್ಕೂ, ಸಿದ್ದರಾಮಯ್ಯ ಆಡಳಿತಕ್ಕೂ ಹೋಲಿಕೆ ಮಾಡಲು ಸಾಧ್ಯವಿಲ್ಲ ಎಂದು ಅವರು ಹೇಳಿದರು. ಉತ್ತರ ಕನ್ನಡ ಜಿಲ್ಲೆಯ ಜ್ವಲಂತ ಸಮಸ್ಯೆಗಳ ಕುರಿತ ಸಂವಾದ ಕಾರ್ಯಕ್ರಮದಲ್ಲಿ ಭಾಗವಹಿಸಲು ಬಂದಿರುವ ಅವರು ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು. ಕೇಂದ್ರ ಸಚಿವ ಅನಂತಕುಮಾರ ಹೆಗಡೆ ಅವರ ಪದಪ್ರಯೋಗ ಕೇಳಿದರೆ ಅವರು ಹಿಂದೂವೇ ಅಲ್ಲ ಎನ್ನುವ ಭಾವನೆ ಬರುತ್ತದೆ ಎಂದು ಕುಮಾರಸ್ವಾಮಿ ಹೇಳಿದರು.
Comments