ಇಡೀ ದೇಶವನ್ನು ಕಾಂಗ್ರೆಸ್ ಮುಕ್ತ ದೇಶವನ್ನಾಗಿಸುವುದ ಜೊತೆಗೆ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಪಕ್ಷ ಆಡಳಿದ ಚುಕ್ಕಾಣಿ ಹಿಡಿಯುವ ನಿಶ್ಚಿತ : ಬಿಜೆಪಿ ತಾಲೂಕು ಅಧ್ಯಕ್ಷ ವೈ.ಹೆಚ್.ಹುಚ್ಚಯ್ಯ
ಇಡೀ ದೇಶವನ್ನು ಕಾಂಗ್ರೆಸ್ ಮುಕ್ತ ದೇಶವನ್ನಾಗಿಸುವುದ ಜೊತೆಗೆ ಕರ್ನಾಟಕದಲ್ಲಿ ಈ ಬಾರಿ ಬಿಜೆಪಿ ಪಕ್ಷ ಆಡಳಿದ ಚುಕ್ಕಾಣಿ ಹಿಡಿಯುವ ನಿಶ್ಚಿತ ಎಂದು ಬಿಜೆಪಿ ತಾಲೂಕು ಅಧ್ಯಕ್ಷರೂ ಆದ ಜಿ.ಪಂ ಸದಸ್ಯ ವೈ.ಹೆಚ್.ಹುಚ್ಚಯ್ಯ ಹೇಳಿದರು. ಪಟ್ಟಣದ ಎಸ್ಎಸ್ಆರ್ ವೃತ್ತದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಸೋಮವಾರ ಚುನಾವಣೆಯಲ್ಲಿ ಬಿಜೆಪಿ ಸಂಭ್ರಮಾಚರಣೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು. ನರೇಂದ್ರಮೋದಿ ಮತ್ತು ಪಕ್ಷದ ಅದ್ಯಕ ಅಮಿತ್ ಶಾ ನೇತೃತ್ವದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಸಿಕ್ಕ ಜಯ ಕರ್ನಾಟಕದಲ್ಲಿ 2018ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಕೊರಟಗೆರೆ: ಇಡೀ ದೇಶವನ್ನು ಕಾಂಗ್ರೆಸ್ ಮುಕ್ತ ದೇಶವನ್ನಾಗಿಸುವುದ ಜೊತೆಗೆ ಕನರ್ಾಟಕದಲ್ಲಿ ಈ ಬಾರಿ ಬಿಜೆಪಿ ಪಕ್ಷ ಆಡಳಿದ ಚುಕ್ಕಾಣಿ ಹಿಡಿಯುವ ನಿಶ್ಚಿತ ಎಂದು ಬಿಜೆಪಿ ತಾಲೂಕು ಅಧ್ಯಕ್ಷರೂ ಆದ ಜಿ.ಪಂ ಸದಸ್ಯ ವೈ.ಹೆಚ್.ಹುಚ್ಚಯ್ಯ ಹೇಳಿದರು.
ಪಟ್ಟಣದ ಎಸ್ಎಸ್ಆರ್ ವೃತ್ತದಲ್ಲಿ ಬಿಜೆಪಿ ತಾಲೂಕು ಘಟಕದ ವತಿಯಿಂದ ಸೋಮವಾರ ಚುನಾವಣೆಯಲ್ಲಿ ಬಿಜೆಪಿ ಸಂಭ್ರಮಾಚರಣೆ ಕಾರ್ಯದಲ್ಲಿ ಪಾಲ್ಗೊಂಡು ಮಾತನಾಡಿದರು.
ನರೇಂದ್ರಮೋದಿ ಮತ್ತು ಪಕ್ಷದ ಅದ್ಯಕಅಮಿತ್ ಶಾ ನೇತೃತ್ವದಲ್ಲಿ ಗುಜರಾತ್ ಮತ್ತು ಹಿಮಾಚಲ ಪ್ರದೇಶದಲ್ಲಿ ನಡೆದ ಚುನಾವಣೆಯಲ್ಲಿ ಸಿಕ್ಕ ಜಯ ಕರ್ನಾಟಕದಲ್ಲಿ 2018ರ ಚುನಾವಣೆಗೆ ದಿಕ್ಸೂಚಿಯಾಗಲಿದೆ ಎಂದರು.
ಜಿಲ್ಲಾ ಬಿಜೆಪಿ ವೈದ್ಯಕೀಯ ಮೋರ್ಚ ಕಾರ್ಯದರ್ಶಿ ಡಾ.ಲಕ್ಷ್ಮೀಕಾಂತ ಮಾತನಾಡಿ ಪಕ್ಷಕ್ಕೆ ಜನಸಾಮಾನ್ಯರಿಂದ ಮನ್ನಣೆದೂರಕಿದೆ ಕರ್ನಾಟಕ ರಾಜ್ಯದಲ್ಲಿಯೂ ಸಹ ಬಿಜೆಪಿ ಅಧಿಕಾರಕ್ಕೆ ಬರುವ ಮೂಲಕ ಇಡೀ ದೇಶದಲ್ಲಿ ಕಾಂಗ್ರೆಸ್ ಪಕ್ಷ ಧೂಳಿಪಟವಾಗಲಿದೆ ಎಂದರು.
ಬೆಂಗಳೂರು ನಗರ ಎಸ್ಸಿ ಮೋರ್ಚಜಿಲ್ಲಾ ಕಾರ್ಯದರ್ಶಿ ಆರತಿ ಮಾತನಾಡಿ ನರೇಂದ್ರಮೋದಿ ನೇತೃತ್ವದಕೇಂದ್ರ ಸರಕಾರರಾಜ್ಯದಲ್ಲಿನ ಬಡವರಿಗೆ ನೀಡುತ್ತಿರುವ ಅನ್ನಭಾಗ್ಯ ಯೋಜನೆಗಾಗಿ ಪ್ರತಿ ಕೆಜಿಗೆ 28 ರೂ ಅನುಧಾನ ಬಳಸುತ್ತಿದ್ದಾರೆ ಸಚಿವೆ ಉಮಾಶ್ರೀ ಮಹಿಳೆಯರಿಗೆ ದಾರಿ ತಪ್ಪಿಸುವ ಕೆಲಸ ಮಾಡಿದ್ದಾರೆ ಮುಂದಿನ ದಿನಗಳಲ್ಲಿ ಕೇಂದ್ರ ಸರಕಾರದ ಅಭಿವೃದ್ದಿ ಯೋಜನೆ ಮತ್ತು ದಾಖಲೆ ಸಮೇತ ಮತದಾರರಿಗೆ ತಲುಪಿಸುವ ಪ್ರಯತ್ನ ಮಾಡುತ್ತೇವೆ ಎಂದರು.
ಪಟ್ಟಣದಎಸ್ಎಸ್ಆರ್ ವೃತ್ತ ಮತ್ತು ಕೆಎಸ್ಆರ್ಟಿಸಿ ವೃತ್ತದಿಂದ ನೂರಾರು ಬಿಜೆಪಿ ಕಾರ್ಯಕರ್ತರು ಪಟಾಕಿ ಸಿಡಿಸುವ ಮೂಲಕ ಸಾರ್ವಜನಿಕರಿಗೆ ಸಿಹಿ ಹಂಚಿ ಸಂಭ್ರಮಿಸಿದ ನಂತರ ಪಟ್ಟಣದ ಮುಕ್ತ ರಸ್ತೆ ಮತ್ತು ಪಟ್ಟಣದ ವಾರ್ಡ್ ಗಳಲ್ಲಿ ಬೈಕ್ ರ್ಯಾಲಿ ನಡೆಸುವ ಮೂಲಕ ಪ್ರಧಾನಿ ನರೇಂದ್ರಮೋದಿಯವರಿಗೆ ಗೆಲುವಿನ ಜೈಕಾರ ಹಾಕಿದರು.
ವಿಜಯೋತ್ಸವಕಾರ್ಯಕ್ರಮದಲ್ಲಿ ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಪವನಕುಮಾರ್, ವಿಜಯಕುಮಾರ್, ಪ್ರಸನ್ನಕುಮಾರ್, ತಾಲೂಕು ಉಪಾಧ್ಯಕ್ಷ ಚಂದ್ರಣ್ಣ, ಕಾರ್ಯದರ್ಶಿ ಮಹೇಶ್, ಯುವಮೋಚರ್ಾದ ಅಧ್ಯಕ್ಷ ಗುರುಧತ್, ವಿರೋಪಾಕ್ಷರಾಧ್ಯ, ಮುಖಂಡರಾದ ರವಿಶಂಕರ್, ಹನುಮಂತರಾಜು, ನವೀನಕುಮಾರ್, ಸ್ವಾಮಿ, ಗಂಗರಾಜು, ಪುಟ್ಟಣ್ಣ, ಬಾಲರಾಜು, ಪುನೀತ, ಮೆಡಿಕಲ್ಕುಮಾರ್, ಉಲ್ಲಾಸ್ ಸೇರಿದಂತೆ ಇತರರು ಇದ್ದರು.(ಚಿತ್ರಇದೆ)
18ಕೊರಟಗೆರೆ ಚಿತ್ರ2:- ಕೊರಟಗೆರೆ ಪಟ್ಟಣದಲ್ಲಿ ಏರ್ಪಡಿಸಲಾಗಿದ್ದ ಬಿಜೆಪಿ ವಿಜಯೋತ್ಸವ ಕಾರ್ಯಕ್ರಮದಲ್ಲಿ ವೈ.ಹೆಚ್.ಹುಚ್ಚಯ್ಯ, ಡಾ.ಲಕ್ಷ್ಮೀಕಾಂತ್ ಸೇರಿದಂತೆ ಇತರರು ಇದ್ದರು.
ಬಾಕ್ಸ್ ))))
ಕಾಂಗ್ರೆಸ್ ಪಕ್ಷದ ಮಹಿಳಾಸಬಲೀಕರಣ ಸಮಾವೇಶದಲ್ಲಿ ಪ್ರತಿಯೊಂದು ಸ್ತ್ರೀ ಶಕ್ತಿ ಸಂಘಗಳಿಗೆ ತಲಾ 1ಲಕ್ಷಗಳನ್ನು ಸಾಲ ಮಂಜೂರು ಮಾಡುವುದಾಗಿ ಹೇಳಿ ಒಂದು ಸಾವಿರ ಮುಂಗಡ ಹಣವನ್ನು ನೀಡಿ ಸಮಾವೇಶಕ್ಕೆ ಕರೆತಂದು ಹಿದಿರುಗುವಾಗ ಹಣವನ್ನು ನೀಡದಿರುವುದಕ್ಕೆ ಹೆಂಗಸರು ಛೀಮಾರಿ ಹಾಕಿದ್ದಾರೆ ಇವು ಹೆಚ್ಚು ಕಾಲ ನಡೆಯುವುದಿಲ್ಲ.
- ವೈ.ಹೆಚ್ ಹುಚ್ಚಯ್ಯ. ತಾಲ್ಲೂಕು ಬಿಜೆಪಿ ಅಧ್ಯಕ್ಷ.
Comments