ಚಾಮುಂಡೇಶ್ವರಿ ಕ್ಷೇತ್ರದಲ್ಲಿ ಜಿ.ಟಿ.ದೇವೇಗೌಡರ ಪ್ರಾಬಲ್ಯಕ್ಕೆ ಸಿದ್ದರಾಮಯ್ಯಗೆ ನಡುಕ ಶುರು

08 Nov 2017 4:17 PM |
2559 Report

ಮುಂದಿನ ಚುನಾವಣೆಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸುತ್ತೇನೆಂದು ಹೇಳುತ್ತಿದ್ದಾರೆ. ಆದರೆ, ಅವರಿಗೀಗ ಬಾಯ ಶಾರುವಾಗಿದೆ , ಜಿ.ಟಿ.ದೇವೇಗೌಡರ ಪ್ರಾಬಲ್ಯ ನೋಡಿ ನಡುಕ ಶುರುವಾಗಿದೆ . ಚಾಮುಂಡೇಶ್ವರಿ ಕ್ಷೇತ್ರದಿಂದ ಸ್ಪರ್ಧಿಸಿದರೆ ಸಿದ್ದರಾಮಯ್ಯ ನವರ ಸೋಲು ಕಟ್ಟಿಟ್ಟ ಬುತ್ತಿ. ಚಾಮುಂಡೇಶ್ವರಿ ಜೆಡಿಎಸ್ ಭದ್ರಕೋಟೆ ಆಗಿದೆ. 

ಅದು ಎಂದಿಗೂ ಕಾಂಗ್ರೆಸ್ ಪಾಲು ಆಗುವುದಿಲ್ಲ ಎಂದಿರುವ ಜಿ.ಟಿ.ದೇವೇಗೌಡರು, ನಾಲ್ಕು ವರ್ಷದಿಂದ ಚಾಮುಂಡೇಶ್ವರಿ ಕ್ಷೇತ್ರವನ್ನು ಮರೆತಿದ್ದೇ ಇದಕ್ಕೆ ಕಾರಣ ಎನ್ನುತ್ತಿದ್ದಾರೆ ಜನ. ಜೆಡಿಎಸ್ ಯಾಕೆ ಇಲ್ಲಿ ಗೆಲುವು ಕಾಣುತ್ತೆ ಎನ್ನುವುದಕ್ಕೆ ಇಲ್ಲಿದೆ ಉತ್ತರ ಕ್ಷೇತ್ರದ ಜನರಲ್ಲಿ ಎಚ್ ಡಿ ಕುಮಾರಸ್ವಾಮಿಯವರಿಗೆ ಒಂದು ಅವಕಾಶ ಕೊಡಬೇಕೆಂಬ ಮಾತು ಕೇಳಿಬರುತ್ತಿದೆ. ಜೆಡಿಎಸ್ ನ ರೈತರ ಸಾಲ ಮನ್ನಾ ಘೋಷಣೆಯು ಈ ಕ್ಷೇತ್ರದಲ್ಲಿ ತುಂಬಾ ಪ್ರಭಾವಿಯಾಗಿ ಕೆಲಸ ಮಾಡುತ್ತಿದೆ. ಜಿ.ಟಿ.ದೇವೇಗೌಡರು ನಮ್ಮ ಚಾಮುಂಡೇಶ್ವರಿ ಕ್ಷೇತ್ರದ ಹೆಮ್ಮೆಯ ಮಗ. ಹೆಮ್ಮೆಯ ಶಾಸಕರು, ಅಭಿವೃದ್ಧಿಯ ಹರಿಕಾರರು. ಯಾರೇ ಬಂದರೂ ಪ್ರಬುದ್ಧ ಮತದಾರರ ಒಲವು ಇರುವುದು ಜಿಟಿಡಿ ಅವರ ಮೇಲೆ ಇದೆ.

Edited By

Suresh M

Reported By

jds admin

Comments