ದೇವೇಗೌಡರ ರಾಜಕೀಯ ನೆಡೆ ಕಂಡು ಬೇಚಿಬಿದ್ದರೇ ಶಾಸಕ ಎಚ್.ಸಿ. ಬಾಲಕೃಷ್ಣ ?

‘ರಾಜಕೀಯವಾಗಿ ನನ್ನನ್ನು ಮುಗಿಸುವ ದುರುದ್ದೇಶದಿಂದ ಜೆಡಿಎಸ್ ವರಿಷ್ಠ ಎಚ್.ಡಿ. ದೇವೇಗೌಡರು ಪಂಚಾಯಿತಿ ಮಟ್ಟದ ರಾಜಕಾರಣಕ್ಕೆ ಇಳಿದಿದ್ದು, ಇದು ಅವರಿಗೆ ಶೋಭೆ ತರುವ ಕೆಲಸವಲ್ಲ’ ಎಂದ ಶಾಸಕ ಎಚ್.ಸಿ. ಬಾಲಕೃಷ್ಣ .‘ಅವರನ್ನು ನಾವು ಈಗಲೂ ನರೇಂದ್ರ ಮೋದಿ, ಸೋನಿಯಾ ಗಾಂಧಿ ಮಟ್ಟದಲ್ಲಿಯೇ ನೋಡುತ್ತೇವೆ. ಆದರೆ ಅವರು ನಮ್ಮ ಮಟ್ಟಕ್ಕೆ ಇಳಿದು ….
ರಾಜಕಾರಣ ಮಾಡುವುದು ತರವಲ್ಲ ಅವರು ಏನಿದ್ದರೂ ತಮ್ಮ ಸರಿಸಮನಾದವರ ಎದುರು ತೊಡೆ ತಟ್ಟಿ ನಿಲ್ಲಬೇಕು’ ಎಂದು ಅಭಿಪ್ರಾಯಪಟ್ಟರು. ‘ಜೆಡಿಎಸ್ ನಲ್ಲಿ ಯಾವ ನಾಯಕರ ಬೆಳವಣಿಗೆಯನ್ನು ವರಿಷ್ಠರು ಸಹಿಸುವುದಿಲ್ಲ. ಹೀಗಾಗಿಯೇ ಎಲ್ಲರೂ ಅವರಿಂದ ದೂರವಾಗಿದ್ದೇವೆ. ಜಿಲ್ಲೆಯಲ್ಲಿ ಜೆಡಿಎಸ್ ದುರ್ಬಲಗೊಳ್ಳಲು ಅವರ ನಡವಳಿಕೆಗಳೇ ಕಾರಣ. ಯಾವ ಕಾರ್ಯಕರ್ತರ ಕಷ್ಟವನ್ನೂ ಅವರು ಕೇಳಲಿಲ್ಲ. ಚುಣಾವಣೆಗಳಲ್ಲಿ ಬಂದು ಕೆಲಸ ಮಾಡಲಿಲ್ಲ’ ಎಂದು ದೂರಿದರು.
‘ತಮಗೆ ರಾಜಕೀಯವಾಗಿ ಪುರ್ನಜನ್ಮ ನೀಡಿದ ರಾಮನಗರ ಜಿಲ್ಲೆಗಿಂತ ದೇವೇಗೌಡರಿಗೆ ಹಾಸನದ ಮೇಲೆಯೇ ಹೆಚ್ಚು ವ್ಯಾಮೋಹ, ಹೀಗಾಗಿ ಎಲ್ಲ ಯೋಜನೆಗಳನ್ನು ಅವರು ತಮ್ಮ ತವರು ಜಿಲ್ಲೆಗೆ ಕೊಂಡೊಯ್ಯುತ್ತಾರೆ. ಯಾವತ್ತೂ ಇಲ್ಲಿನ ಅಭಿವೃದ್ಧಿಗಾಗಿ ಹೋರಾಟ ಮಾಡಿಲ್ಲ. ಮೇಕೆದಾಟು ಯೋಜನೆಯಿಂದ ಜಿಲ್ಲೆಯ ಜನರಿಗೆ ಹೆಚ್ಚು ಉಪಯೋಗ ಆಗಲಿದ್ದು, ಗೌಡರು ಪ್ರಧಾನಿ ಜೊತೆ ಚರ್ಚಿಸಿ ಅದನ್ನು ಕಾರ್ಯಗತಗೊಳಿಸಲು ಪ್ರಯತ್ನಿಸಬಹುದು. ಆದರೆ ಅವರು ಆ ಕೆಲಸ ಮಾಡುವುದಿಲ್ಲ’ ಎಂದರು.
Comments