ಮಂಗಳೂರು ಚಲೋ ಬಗ್ಗೆ ಬಿಜೆಪಿಯವರನ್ನು ಪ್ರಶ್ನಿಸಿದ ದೇವೇಗೌಡರು

05 Sep 2017 5:00 PM |
984 Report

ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿ ಹಮ್ಮಿಕೊಂಡಿರುವ ಮಂಗಳೂರು ಚಲೋ ಬಗ್ಗೆ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ ಪ್ರತಿಕ್ರಿಯೆ ನೀಡಿದ್ದು, ಮಂಗಳೂರು ಚಲೋ ಬಗ್ಗೆ ನನ್ನ ಮನಸ್ಸಲ್ಲಿ ನೋವಿದೆ ಎಂದು ಹೇಳಿದ್ದಾರೆ. 

 

ಮಂಗಳೂರು ಚಲೋ ಬೈಕ್ ರ‍್ಯಾಲಿ ಬಗ್ಗೆ ದಾವಣಗೆರೆಯಲ್ಲಿ ಪ್ರತಿಕ್ರಿಯೆ ನೀಡಿರುವ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡ, ಶಾಂತಿ ಕದಡುವ ಕೆಲಸ ಮಾಡಲಾಗುತ್ತಿದೆ. ಇದು ಉತ್ತಮ ಬೆಳವಣಿಗೆಯಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.  ರಾಜ್ಯದಲ್ಲಿ ಸಾಮರಸ್ಯದ ಬದುಕು ಎಲ್ಲರಿಗೂ ಬೇಕಾಗಿದೆ ಎಂದಿರುವ ಹೆಚ್ ಡಿ ದೇವೇಗೌಡ, ಕೆಲವರು ಶಿಕ್ಷಣ ಸಂಸ್ಥೆಗಳನ್ನು ಪ್ರಾರಂಭಿಸಿದ್ದಾರೆ ಅದನ್ನು ಧರ್ಮದ ಜತೆ ತಳುಕು ಹಾಕುವುದು ಸರಿಯಲ್ಲ ಎಂದಿದ್ದಾರೆ. 

Edited By

Suresh M

Reported By

jds admin

Comments