ಹಾಲಿ ಶಾಸಕರಿಗೆ ಕ್ಲಾಸ್​ ತೆಗೆದುಕೊಂಡ ಸಿಎಂ ಸಿದ್ದರಾಮಯ್ಯ

30 Nov 2017 11:12 AM | Politics
334 Report

ಬೆಂಗಳೂರಿನ ಚುನಾವಣಾ ಟ್ರೆಂಡ್​ ಕುರಿತು ನಡೆಸಿದ ಸಮೀಕ್ಷೆಯಲ್ಲಿ ಹಲವು ಕೈ ಶಾಸಕರಿಗೆ ಭಾರಿ ಜನ ವಿರೋಧ ವ್ಯಕ್ತವಾಗಿದೆ. ಆಡಳಿತ ವಿರೋಧಿ ಅಲೆ ಎದುರಿಸುತ್ತಿರುವ ಶಾಸಕರನ್ನು ಸಿಎಂ ಗೃಹ ಕಚೇರಿ ಕೃಷ್ಣಾಗೆ ಕರೆಸಿಕೊಂಡು ಕ್ಲಾಸ್​ ತೆಗೆದುಕೊಂಡಿದ್ದಾರೆ.

ವಿಧಾನಸಭೆ ಚುನಾವಣೆ ಹತ್ತಿರವಾಗುತ್ತಿದ್ದಂತೆ ಆಡಳಿತಾರೂಢ ಕಾಂಗ್ರೆಸ್​ ಚುನಾವಣಾ ಟ್ರೆಂಡ್​ ತಿಳಿದುಕೊಳ್ಳಲು ಸರ್ವೇ ನಡೆಸಿದೆ. ಇದೇ ಸಂದರ್ಭದಲ್ಲಿ ಸಿಎಂ ತಪ್ಪು ಸರಿಪಡಿಸಿಕೊಳ್ಳಿ ಇಲ್ಲವೆ ಕ್ಷೇತ್ರ ಬಿಟ್ಟು ಕೊಡಲು ಸಿದ್ಧರಾಗಿ. ಮುಂದಿನ ಸರ್ವೇಯ ವೇಳೆಗೆ ಕ್ಷೇತ್ರದಲ್ಲಿ ಪರಿಸ್ಥಿತಿ ಬದಲಾಗಬೇಕು ಎಂದು ಎಚ್ಚರಿಕೆ ನೀಡಿದ್ದಾರೆ ಎಂದು ತಿಳಿದುಬಂದಿದೆ. 

Edited By

Hema Latha

Reported By

Madhu shree

Comments