ನಾಳೆ ಮೈಸೂರಿನಲ್ಲಿ ನಳ ನಳಿಸಲಿದೆ ಕುಮಾರ ಪರ್ವದ ಪತಾಕೆ

ಚುನಾವಣಾ ಅಖಾಡದಲ್ಲಿ ಮಟ್ಟಿ ,ಮಣ್ಣನ್ನ ಮೈಗೆರಚಿ ರಣಾಂಗಣದಲ್ಲಿ ರಂಗೇರಿ ಸಂಚಲಿಸುತ್ತಿರುವ ಕುಮಾರ ಪರ್ವ ಇದೀಗ ಮಲ್ಲಿಗೆ ನಗರಿಯ ಚಾಮರಾಜ ಕ್ಷೇತ್ರಕ್ಕೆ ಕಾಲಿಟ್ಟಿದೆ. ಹುಬ್ಬಳ್ಳಿಯಲ್ಲಿ ಬೃಹತ್ ಬಹಿರಂಗ ಸಮಾವೇಶದ ಜೊತೆಗೆ ರೋಡ್ ಶೋ ಹಮ್ಮಿಕೊಂಡಿದ್ದು, ಸಾಂಸ್ಕೃತಿಕ ನಗರೀಯಲ್ಲಿ ತಮ್ಮ ಶಕ್ತಿ ಪ್ರದರ್ಶನವನ್ನು ಹಮ್ಮಿಕೊಂಡಿದೆ.
ಇನ್ನೂ ಈ ವಿಚಾರವನ್ನು ಚಾಮರಾಜ ನಗರ ಕ್ಷೇತ್ರದ ಮುಖಂಡರು ಮತ್ತು ಅಭ್ಯರ್ಥಿ ಎಂದು ಬಿಂಬಿತವಾಗಿರು ಮೈಸೂರಿನ ವಿಶ್ರಾಂತ ಕುಲಪತಿಯೂ ಆದ ಪ್ರೊ. ಕೆ.ಎಸ್ ರಂಗಪ್ಪ ಇತ್ತ ಚಾಮರಾಜ ಕ್ಷೇತ್ರದಲ್ಲಿ ಅಸಮಧಾನದ ಹೊಗೆಯೂ ಕೂಡ ಈ ಕಾರ್ಯಕ್ರಮಕ್ಕೆ ಕವಿಯುವ ಅನುಮಾನಗಳಿದ್ದು, ಕ್ಷೇತ್ರದ ಕಳೆದೆರಡು ಚುನಾವಣಾ ವರ್ಷಗಳಿಂದ ಟಿಕೆಟ್ ಆಕಾಂಕ್ಷಿಯಾಗಿರುವ ಕೆಜಿ ಕೊಪ್ಪಲ್ ಹರೀಶ್ ರವರು ಈ ಕಾರ್ಯಕ್ರಮದಿಂದ ದೂರ ಉಳಿದು ಕಾರ್ಯಕ್ರಮದ ಮೇಲೆ ವ್ಯತಿರಿಕ್ತ ಪರಿಣಾಮ ಬೀರುವರೇ ಎಂದು ಕಾದು ನೋಡಬೇಕಿದೆ.
Comments