ಸರ್ಕಾರಿ ಬಸ್ ಚಲಿಸುತ್ತಿದ್ದಾಗಲೇ ಕಳಚಿಕೊಂಡ ಟೈರ್..​​! ಪ್ರಯಾಣಿಕರು ಪ್ರಾಣಪಾಯದಿಂದ ಪಾರು

25 Oct 2018 5:42 PM | General
384 Report

ಬಸ್ ಗಳು ಚಲಿಸುತ್ತಿದ್ದಾಗ ಅಪಘಾತಗಳು ಆಗೋದು ಕಾಮನ್. ಆದರೆ ಚಲಿಸುತ್ತಿದ್ದ ಬಸ್​ನ ಟೈರ್​​ ಕಳಚಿ ಬಿದ್ದು ಚಾಲಕನ ಸಮಯಪ್ರಜ್ಞೆಯಿಂದ ಭಾರಿ ಅನಾಹುತ ತಪ್ಪಿರುವ ಘಟನೆ ಚಿಕ್ಕ ಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನಲ್ಲಿ ನಡೆದಿದೆ. ಮೂಡಿಗೆರೆ ತಾಲೂಕಿನ ಭೂತನಕಾಡು ಬಳಿ ಚಲಿಸುತ್ತಿದ್ದ ಕೆಎಸ್​ಆರ್​​ಟಿಸಿ ಬಸ್​​ನ ಟೈರ್ ಇದ್ದಕ್ಕಿದ್ದ ಹಾಗೆ ಕಳಚಿದೆ.

ಆ ಸಮಯದಲ್ಲಿ ಬಸ್​​ನ ನಿಯಂತ್ರಣ ತಪ್ಪಿದ್ದು ಸ್ವಲ್ವ ದೂರ ಚಲಿಸುತ್ತಿದ್ದಂತೆಯೇ ಚಾಲಕ ತನ್ನ ಸಮಯ ಪ್ರಜ್ಞೆಯಿಂದ ಬಸ್​​ ನಿಲ್ಲಿಸಿದ್ದಾನೆ. ಸ್ವಲ್ಪದರಲ್ಲೇ ದೊಡ್ಡ ಅನಾಹುತ ತಪ್ಪಿದ್ದು ಬಸ್​​ನಲ್ಲಿದ್ದ ಕೆಲ ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ ಎಂದು ಹೇಳಲಾಗುತ್ತಿದೆ. ಗಾಯಳುಗಳನ್ನು ಮೂಡಿಗೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಚಿಕ್ಕಮಗಳೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಬಸ್ ಇದಾಗಿದ್ದು ಆಲ್ದೂರು ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

Edited By

Manjula M

Reported By

Manjula M

Comments