ರೈತರ ಪರವಾಗಿ ನಿಂತ ಎಚ್ ಡಿ ರೇವಣ್ಣ ಹೇಳಿದ್ದೇನು..?

ಸಮ್ಮಿಶ್ರ ಸರ್ಕಾರ ರಚನೆಯಾದ ಮೇಲೆ ರೈತರ ಸಾಲ ಮನ್ನಾ ಮಾಡುವ ವಿಚಾರದ ಬ್ಯಾಂಕ್ ಅಧಿಕಾರಿಗಳಿಗೆ ತಿಳಿಸಿದರೂ ಕೂಡ ನೋಟಿಸ್ ನೀಡಿರುವ ಘಟನೆಗಳು ನಡೆದಿವೆ. ಈಬಗ್ಗೆ ಬ್ಯಾಂಕ್ ನೋಟಿಸ್ ನೀಡಿದ್ರೆ ಡಬ್ಬಕ್ಕೆ ಎಸೆಯಿರಿ ಅಂತ ಸಚಿವ ಎಚ್.ಡಿ.ರೇವಣ್ಣ ರೈತರಿಗೆ ಕರೆ ನೀಡಿದ್ದಾರೆ. ಅವರು ಇಂದು ಹಾಸನದಲ್ಲಿ ನಡೆದ ಗಾಂಧಿ ಜಯಂತಿ ಕಾರ್ಯಕ್ರಮದಲ್ಲಿ ಭಾಗವಹಿಸಿದ ಬಳಿಕ ಮಾಧ್ಯಮಗಳ ಜೊತೆ ಮಾತನಾಡಿದರು.
ಇದೇ ವೇಳೆ ಅವರು ಸಾಲಮನ್ನಾ ಆದೇಶ ನೀಡಿದ್ದರೂ ಬ್ಯಾಂಕ್ಗಳಿಂದ ರೈತರಿಗೆ ನೋಟಿಸ್ ನೀಡುತ್ತಿರುವ ವಿಚಾರ ಮಾತನಾಡಿ ನೋಟಿಸ್ ನೀಡದಂತೆ ಬ್ಯಾಂಕ್ ಅಧಿಕಾರಿಗಳ ಮೇಲೆ ನಿಗಾ ಇಡಲು ಜಿಲ್ಲಾಧಿಕಾರಿ ಹಾಗೂ ಪೊಲೀಸ್ ವರಿಷ್ಠಾಧಿಕಾರಿಗಳಿಗೆ ಸೂಚನೆ ನೀಡಲಾಗಿದೆ ಎಂದು ತಿಳಿಸಿದರು. ಇನ್ನು ಕುಮಾರಸ್ವಾಮಿ ಅವರು ನೋಟಿಸ್ ನೀಡದಂತೆ ಹೇಳಿದ್ದರೂ ಮತ್ತೆ ಅದೇ ಕೆಲಸ ಮಾಡಿ ರೈತರಿಗೆ ಬೆದರಿಕೆ ಹಾಕುತ್ತಿದ್ದಾರೆ. ನೋಟಿಸ್ ನೀಡಿದ ಅಧಿಕಾರಿಯನ್ನು ಜೈಲಿಗೆ ಕಳುಹಿಸಬೇಕಾಗುತ್ತದೆ ಎಂದು ಎಚ್ಚರಿಕೆ ಕೂಡ ಈ ಸಂದರ್ಭದಲ್ಲಿ ನೀಡಿದರು.
Comments