ಸುಪ್ರಿಂಕೋರ್ಟ್’ನಿಂದ ವಾಹನ ಮಾಲೀಕರಿಗೆ ಸಿಹಿಸುದ್ದಿ..! ಏನ್ ಗೊತ್ತಾ..?

ಅಪಘಾತವಾದ ವೇಳೆಯಲ್ಲಿ ಮೂರನೇ ವ್ಯಕ್ತಿ ಮೃತಪಟ್ಟರೆ ಅವರ ಕುಟುಂಬಕ್ಕೆ ಯಾವುದೇ ಪರಿಹಾರ ಸಿಗದಿರುವ ಹಿನ್ನಲೆಯಲ್ಲಿ ಇದೀಗ ಸುಪ್ರಿಂಕೋರ್ಟ್ ಮೃತರಿಗೆ ಸಹಾಯ ಮಾಡಲು ನೆರವಾಗಿದೆ.
ದ್ವಿಚಕ್ರ ಸೇರಿದಂತೆ ಎಲ್ಲಾ ವಾಹನಗಳಿಗೂ ಮೂರನೇ ಪಾರ್ಟಿ ವಿಮೆ ಕಡ್ಡಾಯ ಎಂದು ಸುಪ್ರೀಂಕೋರ್ಟ್ ಆದೇಶವನ್ನು ಹೊರಡಿಸಿದೆ . ರಸ್ತೆ ಅಪಘಾತದಲ್ಲಿ ವರ್ಷಕ್ಕೆ ಒಂದು ಲಕ್ಷಕ್ಕೂ ಹೆಚ್ಚು ಜನರು ಸಾವನ್ನಪ್ಪುತ್ತಿದ್ದಾರೆ ಎಂದು ಸಮಿತಿ ವರದಿಯನ್ನು ಆಧಾರಿಸಿ ಸುಪ್ರೀಂಕೋರ್ಟ್ ಈ ಆದೇಶವನ್ನು ಹೊರಡಿಸಿದೆ ಎಂದು ತಿಳಿದುಬಂದಿದೆ. ನಿವೃತ್ತ ನ್ಯಾಯಮೂರ್ತಿಗಳಾದ ಕೆ.ಎಸ್ ರಾಧಕೃಷ್ಣನ್ ನೇತೃತ್ವದ ನ ಸಮಿತಿಯೂ ಯಾವುದೇ ಕಂಪನಿಯೂ ಗ್ರಾಹಕರಿಗೆ ದ್ವಿಚಕ್ರ ಮತ್ತು ಇತರೆ ವಾಹನಗಳನ್ನು ಮಾರಾಟ ಮಾಡುವಾಗಲೂ ಸಹ ಮೂರನೇ ಪಾರ್ಟಿ ವಿಮೆ ಕಡ್ಡಾಯಗೊಳಿಸಬೇಕು. ಅಷ್ಟೆ ಅಲ್ಲದೇ ಮೂರನೇ ಪಾರ್ಟಿ ವಿಮೆಯನ್ನು ಒಂದು ವರ್ಷದ ಬದಲಿಗೆ, 3 ಮತ್ತು 5 ವರ್ಷಕ್ಕೊಮ್ಮೆ ಮಾಡಿಸಬೇಕು ಎಂದು ತಿಳಿಸಿದ್ದಾರೆ.
Comments