ರೈತರಿಗೆ ಬಿಗ್ ಶಾಕ್ ನೀಡಲು ರೆಡಿಯಾದ ಕೆಎಮ್ಎಫ್..!

ರಾಜ್ಯದಲ್ಲಿ ಹೈನುಗಾರಿಕೆಯನ್ನು ನಂಬಿಕೊಂಡಿದ್ದ ರೈತರ ಜೇಬಿಗೆ ಕತ್ತರಿ ಹಾಕುವುದಕ್ಕೆ ಸರ್ಕಾರವು ಈಗಾಗಲೇ ಚಿಂತನೆಯನ್ನು ನಡೆಸಿದೆ ಎನ್ನುವ ಆಘಾತಕಾರಿ ಸುದ್ದಿಯನ್ನು ವರದಿ ಮಾಡಿದೆ.
ರಾಜ್ಯದಲ್ಲಿ ಹಾಲಿನ ಉತ್ಪನ್ನವು ಹೆಚ್ಚಾಗಿರುವ ಕಾರಣ ಪ್ರತಿ ಲೀಟರ್ ಹಾಲಿಗೆ 2 ರೂಪಾಯಿಗಳನ್ನು ಖಡಿತಗೊಳಿಸುವುದಕ್ಕೆ ಕೆಎಮ್ಎಫ್ ಚಿಂತನೆ ನಡೆಸಿದೆ ಎನ್ನುವ ಸುದ್ದಿ ತಿಳಿದಿದೆ. ರಾಜ್ಯದಲ್ಲಿ ಮೊದಲು ಸುಮಾರು 73 -75 ಲಕ್ಷ ಲೀಟರ್ ಹಾಲು ಉತ್ಪತ್ತಿಯಾಗುತ್ತಿತು 81 ಲಕ್ಷ ಲೀಟರ್ ಹಾಲು ಉತ್ಪಾದನೆಯಾಗುತ್ತಿರುವ ಕಾರಣದಿಂದಾಗಿ ಅದನ್ನು ಮಾರಾಟ ಮಾಡುವುದಕ್ಕೆ ಕಷ್ಟವಾಗುತ್ತಿದೆ ಎನ್ನುವ ಕಾರಣವನ್ನಿಟ್ಟು ರೈತರು ನೀಡುವ ಹಾಲಿನ ಬೆಲೆಯಲ್ಲಿ 2 ರೂ ಖಡಿತಗೊಳಿಸುವುದಕ್ಕೆ ಚಿಂತನೆಯನ್ನು ನಡೆಸಿದೆ.ಈಗ ತಾನೆ ಮೈತ್ರಿ ಸರ್ಕಾರ ರಚನೆ ಆಗಿದೆ.ರೈತ ಪರ ಸರ್ಕಾರ ಎಂದು ಹೇಳಿಕೊಳ್ಳುವ ಕುಮಾರಸ್ವಾಮಿ ಅವರ ನೇತೃತ್ವದ ಸರ್ಕಾರದಲ್ಲಿಯೆ ಈ ರೀತಿಯ ನಿರ್ಧಾರ ಎಷ್ಟು ಸರಿ ಎನ್ನುವುದು ರೈತರ ಪ್ರಶ್ನೆಯಾಗಿದೆ. ರೈತರ ಸಾಲ ಮನ್ನಾ ವಿಚಾರದಲ್ಲಿಯೇ ಸಾಕಷ್ಟು ಗೊಂದಲಗಳ ಮಧ್ಯೆದಲ್ಲಿಯೇ ಈ ವಿಷಯ ಕೂಡ ರೈತರಿಗೆ ಶಾಕ್ ನೀಡಿದೆ.
Comments