ಏಪ್ರಿಲ್ 12 ರಂದು ಕರ್ನಾಟಕ ಬಂದ್ ಕರೆ ....!!

05 Apr 2018 2:26 PM | General
619 Report

ಕಾವೇರಿ ನಿರ್ವಹಣೆ ಮಂಡಳಿ ವಿರೋಧಿಸಿ ಇಂದು ಹೊಸೂರು ರಸ್ತೆ ಅತ್ತಿಬೆಲೆ ಗಡಿಬಂದ್ ಮಾಡಲಾಯಿತು. ಕನ್ನಡ ಪರ ಹೋರಾಟಗಾರ ವಾಟಾಳ್ ನಾಗಾರಾಜ್ ನೇತೃತ್ವದಲ್ಲಿ ನಡೆದ ಬಂದ್ ನಲ್ಲಿ ಗಡಿಭಾಗದಲ್ಲಿ ಕನ್ನಡ ಪರ ಹೋರಾಟಗಾರು ಪ್ರತಿಭಟನೆ ನಡೆಸಿ ಕಾವೇರಿ ನಿರ್ವಹಣೆ ಮಂಡಳಿ ರಚನೆ ಮಾಡಬಾರದು ಅಂತ ಒತ್ತಾಯ ಮಾಡಿದ್ರು.

ಇವತ್ತಿನ ತಮಿಳುನಾಡು ಬಂದ್ ಖಂಡಿಸಿ ಏಪ್ರಿಲ್ 12 ರಂದು ಕರ್ನಾಟಕ ಬಂದ್ ಮಾಡೋದೋದಾಗಿ ಎಚ್ಚರಿಕೆ ನೀಡಿದ್ರು..ಕೇಂದ್ರ ಸರ್ಕಾರ ಮಧ್ಯಪ್ರವೇಶ ಮಾಡಿ ನಿರ್ವಹಣೆ ಮಂಡಳಿ ರಚನೆ ಮಾಡದಂತೆ ನೋಡಿಕೊಳ್ಳಬೇಕು ಅಂತ ಆಗ್ರಹಿಸಿದ್ರು

Edited By

Shruthi G

Reported By

Madhu shree

Comments