ಪ್ರೀತಿಯ ಹೆಸರಲ್ಲಿ ಮಗಳನ್ನೇ ವಿವಾಹವಾಗಲು ಮುಂದಾದ ಚಿಕ್ಕಪ್ಪ

ಭಾರತೀಯ ಸಮಾಜದಲ್ಲಿ ಸಂಬಂಧಗಳಿಗೆ ಒಂದು ಅಮೂಲ್ಯವಾದ ಬೆಲೆ ಇದೆ. ಆದರೆ, ಆಧುನಿಕತೆಗೆ ಮಾರು ಹೋಗುತ್ತಿರುವ ಇಂದಿನ ದಿನಮಾನಗಳಲ್ಲಿ ಈ ಸಂಬಂಧಗಳಿಗೆ ಯಾವುದೇ ಬೆಲೆ ಇಲ್ಲವೋ ಏನೋ ಎಂಬ ಭಾವನೆ ವ್ಯಕ್ತವಾಗುತ್ತಿದೆ. ಏಕೆಂದರೆ, ಈ ಸಂಬಂಧವನ್ನು ಯಾರೂ ಕೂಡ ಒಪ್ಪಲಾರರು. ಅಂತಹ ಒಂದು ಸಂಬಂಧ ಇಲ್ಲಿ ಏರ್ಪಟ್ಟಿದೆ. ಓರ್ವ ಯುವಕ ಪ್ರೀತಿಯ ಹೆಸರಲ್ಲಿ ಮಗಳನ್ನೇ ವರಿಸೋಕೆ ಮುಂದಾಗಿದ್ದಾನೆ.
ಬಾಗಲಕೋಟೆಯ ನವನಗರದ ನಿವಾಸಿಯಾಗಿರುವ ಸಾಗರ್ ಸುಗತೇಕರ್ ಎಂಬಾತ ಅದೇ ಕಾಲೋನಿಯ ಪೂನಂ ಸುಗತೇಕರ್ ಎಂಬ ಯುವತಿ ಜತೆಗೆ ಲವ್ವಿ-ಡವ್ವಿ ಶುರುವಾಗಿತ್ತು. ಕಳೆದ ಒಂದು ವರ್ಷದ ಹಿಂದೆ ಯಾರಿಗೂ ಗೊತ್ತಿಲ್ಲದೆ ಈ ಇಬ್ಬರ ನಡುವೆ ಅನೈತಿಕ ಸಂಬಂಧವೂ ಬೆಳೆದಿತ್ತು. ಇದಲ್ಲದೆ ಕಳೆದ ಒಂದು ವಾರದ ಹಿಂದೆ ಈ ಇಬ್ಬರು ಮನೆ ಬಿಟ್ಟು ಹೋಗಿದ್ದರು. ಮದುವೆ ಕೂಡ ಮಾಡಿಕೊಳ್ಳಲು ನಿರ್ಧರಿಸಿದ್ದರು. ಆದರೆ, ಸಂಬಂಧದಲ್ಲಿ ಚಿಕ್ಕಪ್ಪ-ಮಗಳ ಸಂಬಂಧವಿದ್ದು, ಹುಡುಗಿಯ ಪೋಷಕರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ. ಅಲ್ಲದೆ, ಸಮಾಜದ ಮುಖಂಡರ ಸಮಕ್ಷಮ ಪೊಲೀಸರ ನೆರವಿನಿಂದ ಹುಡುಗಿಯನ್ನು ಕರೆದುಕೊಂಡು ಹೋಗಿದ್ದಾರೆ. ಆದರೆ, ಈಗ ಸಾಗರ್ ಈ ಸಂಬಂಧ ನನಗೇನು ಗೊತ್ತಿಲ್ಲ. ನನಗೆ ಅವಳೇ ಬೇಕು ಎಂದು ಹಠ ಹಿಡಿದು ಕುಳಿತಿದ್ದಾನೆ. ಹುಡುಗಿಯನ್ನು ಕರೆತರದಿದ್ದರೆ ಪೊಲೀಸ್ ಠಾಣೆ ಎದುರು ಆತ್ಮಹತ್ಯೆ ಮಾಡಿಕೊಳ್ಳುತ್ತೇನೆ ಎಂದು ಪ್ರತಿಭಟನೆ ಮಾಡುತ್ತಿದ್ದಾನೆ. ಏನಾಯ್ತು, ಎತ್ತ ಹೋಯ್ತು ಸಂಬಂಧದ ಪರಿ. ಯಾರು ತಿಳಿ ಹೇಳುವವರಿಲ್ಲವೇ..?
Comments