ರಾಜಧಾನಿಯ ಬೆಳ್ಳಂಬೆಳಗ್ಗೆ ತುಂತುರು ಕಚಗುಳಿ

ರಾಜಧಾನಿಯಲ್ಲಿ ಕೆಲವು ದಿನಗಳಿಂದ ಮಂಜು ಕವಿದ ವಾತಾವರಣ ಸೃಷ್ಟಿಯಾಗಿದೆ. ಸಿಕ್ಕಾಪಟ್ಟೆ ಚಳಿ ಕೂಡಾ ಶುರುವಾಗಿದೆ. ಬೆಳ್ಳಂಬೆಳಗ್ಗೆ ಗಾಳಿ ರಭಸವಾಗಿಯೇ ಬೀಸುತ್ತಿದೆ. ಜತೆಗೆ ಬೆಳಗ್ಗೆಯಿಂದಲೇ ತುಂತುರು ಅಲ್ಲಲ್ಲಿ ಸಿಂಪಡಣೆಯಾಗಿದೆ.
ಈ ವಾತಾವರಣ ಮುಂಜಾನೆಯ ವಾಯು ವಿಹಾರಿಗಳು, ದೈಹಿಕ ಕಸರತ್ತು ಮಾಡುವವರಿಗೆ ಹಿತಕರವೆನಿಸಿ ಮತ್ತಷ್ಟು ಪ್ರಫುಲ್ಲತೆ ತಂದುಕೊಟ್ಟಿದೆ. ಕೆಲವರಿಗೆ ಕಿರಿಕಿರಿ ಎನಿಸಿದೆ. ಬೈಕ್ ಸವಾರಿ ಮಾಡಿಕೊಂಡು ಕಚೇರಿ, ಕ್ಷೇತ್ರ ಕಾರ್ಯಕ್ಕೆ ಹೊರಟವರಿಗೆ ತುಂತುರು ಮೂಡ್ ಔಟ್ ಮಾಡಿದೆ. ಮಹಾನಗರದ ಹವಾಮಾನದಲ್ಲಿನ ಏರುಪೇರು ತಮಿಳುನಾಡಿನ ಸೈಕ್ಲೋನ್ ತಟ್ಟಿರುವ ಸೂಚನೆ ನೀಡುತ್ತಿದೆ ಎನ್ನುತ್ತಾರೆ ಹವಾಮಾನ ಇಲಾಖೆ ಉಸ್ತುವಾರಿ ನಿರ್ದೇಶಕ ಸುಂದರ್ ಮೇತ್ರಿ.
Comments