ರಾಧಿಕ ಅಭಿನಯದ ‘ಭೈರಾದೇವಿ’ ಶೂಟಿಂಗ್ ಸೆಟ್ ನಲ್ಲಿ ದಿನಕ್ಕೊಂದು ಕುರಿ ಬಲಿ..! ಕಾರಣವೇನು ಗೊತ್ತಾ?

ಕನ್ನಡ ಚಿತ್ರರಂಗದಲ್ಲಿ ಒಳ್ಳೆಯ ಹೆಸರನ್ನು ಗಳಿಸಿದ ನಟಿ… ಕೆಲವೊಂದು ವಿವಾದಗಳಿಂದ ಚಿತ್ರರಂಗದಿಂದ ದೂರವೇ ಉಳಿದುಬಿಟ್ಟಿದ್ದರು. ರಾಧಿಕಾ ಕುಮಾರಸ್ವಾಮಿ ಅವರು ಇತ್ತೀಚೆಗೆ ಹೆಚ್ಚಿಗೆ ಯಾವ ಸಿನಿಮಾಗಳಲ್ಲೂ ಕೂಡ ಕಾಣಿಸಿಕೊಳ್ಳುತ್ತಿರಲಿಲ್ಲ..ಇದೀಗ ಭೈರಾದೇವಿ ಶೂಟಿಂಗ್ ವೇಳೆಯಲ್ಲಿ ನಟಿ ರಾಧಿಕಾ ಬಿದ್ದು ಗಾಯ ಮಾಡಿಕೊಂಡಿರೋ ಘಟನೆ ತಡವಾಗಿ ಬೆಳಕಿಗೆ ಬಂದಿದೆ.ಶಾಂತಿನಗರದ ಸ್ಮಶಾನದಲ್ಲಿ ಗುರುವಾರ ರಾಧಿಕಾ ಅವರು ಕಾಳಿ ಅವತಾರವೆತ್ತುವ ಭಾಗದ ಭೈರಾದೇವಿ ಸಿನಿಮಾದ ಶೂಟಿಂಗ್ ನಡೆದಿತ್ತು. ಚಿತ್ರೀಕರಣದ ವೇಳೆಯಲ್ಲಿ ರಾಧಿಕಾ ಅವರು ಗೋರಿ ಮೇಲೆ ಕಾಲಿಟ್ಟು ಎಡವಿ ಬಿದ್ದ ಪರಿಣಾಮ ಸೊಂಟ ಹಾಗೂ ಕಾಲಿಗೆ ಗಾಯವಾಗಿದೆ.
ತಕ್ಷಣವೇ ರಾಧಿಕಾರನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ನೀಡಲಾಗಿದೆ ಎಂಬ ಮಾಹಿತಿ ಲಭಿಸಿದ್ದು, ವೈದ್ಯರು 30 ದಿನಗಳ ಕಾಲ ವಿಶ್ರಾಂತಿ ಪಡೆಯಲು ಸೂಚಿಸಿದ್ದಾರೆ ಎನ್ನಲಾಗಿದೆ.'ಭೈರಾದೇವಿ' ಶೂಟಿಂಗ್ ವೇಳೆಯಲ್ಲಿ ನಟಿ ರಾಧಿಕಾ ಬಿದ್ದು ಗಾಯ ಮಾಡಿಕೊಂಡಿರುವ ವಿಷಯ ನಿಮಗೆಲ್ಲ ತಿಳಿದಿದೆ. ಈ ನಡುವೆ ಭೈರಾದೇವಿ ಶೂಟಿಂಗ್ ಸೆಟ್ ನಲ್ಲಿ ಕಾಳಿ ಮಾತೆಯನ್ನು ತಣ್ಣಗೆ ಮಾಡಲು ದಿನಕ್ಕೊಂದು ಕುರಿಯನ್ನು ಬಲಿ ಕೊಡಲಾಗುತ್ತಿದೆ ಎನ್ನಲಾಗಿದೆ. ಶಾಂತಿನಗರದ ಸ್ಮಶಾನದಲ್ಲಿ ರಾಧಿಕಾ ಅವರು ಕಾಳಿ ಅವತಾರವೆತ್ತುವ ಭಾಗದ ಭೈರಾದೇವಿ ಸಿನಿಮಾದ ಶೂಟಿಂಗ್ ನಡೆಯುತ್ತಿದ್ದ ವೇಳೆಯಲ್ಲಿ ರಾಧಿಕಾ ಅವರಿಗೆ ಗಾಯವಾಗಿತ್ತು. ಇದು ದೇವರ ಸಿಟ್ಟು ಅಂತ ಅಂದುಕೊಂಡಿರುವ ಸಿನಿಮಾ ತಂಡ ಮಾತೆಯನ್ನು ತಣ್ಣಗೆ ಮಾಡಲು ದಿನಕ್ಕೊಂದು ಕುರಿಯನ್ನು ಬಲಿ ಕೊಡಲಾಗುತ್ತಿದೆಯಂತೆ. ವೈದ್ಯರ ಸಲಹೆ ಮೇರೆಗೆ ಸದ್ಯ ರಾಧಿಕಾ ಅವರು ಮನೆಯಲ್ಲಿಯೇ ವಿಶ್ರಾಂತಿ ಪಡೆಯುತ್ತಿದ್ದಾರೆ ಎಂದು ತಿಳಿದುಬಂದಿದೆ.
Comments