ಚಂದನವನಕ್ಕೆ ಎಂಟ್ರಿ ಕೊಡಲು ಸಿದ್ದನಾದ ಯಜಮಾನ..!! ಯಾವಾಗ ಗೊತ್ತಾ..?

14 Feb 2019 1:12 PM | Entertainment
410 Report

ಸ್ಯಾಂಡಲ್ ವುಡ್ ನ ಬಹು ನಿರೀಕ್ಷಿ ಸಿನಿಮಾವಾದ ಯಜಮಾನ ಚಿತ್ರ ಟ್ರೆಲರ್ ಬಿಡುಗಡೆಯಾಗಿದ್ದು ಅಭಿಮಾನಿಗಳಲ್ಲಿ ಫುಲ್ ಮೀಲ್ಸ್ ಸಿಕ್ಕಿದಂತೆ ಆಗಿದೆ… ಟ್ರೇಲರ್ ನೋಡಿ ಅಭಿಮಾನಿಗಳು ಫುಲ್ ಖುಷಿಯಲ್ಲಿದ್ದಾರೆ. ಹಾಡುಗಳು ಸೂಪರ್ ಹಿಟ್ ಆಗಿವೆ.. ಸಿನಿರಸಿಕರು ದರ್ಶನ್ ಅಭಿನಯದ ಟ್ರೇಲರ್ ನೋಡಿ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.  ವರ್ಷಗಳಿಂದ ದರ್ಶನ್ ಅವರ ಯಾವ ಸಿನಿಮಾನು ಬಿಡುಗಡೆ ಆಗಿಲ್ಲ..ಹಾಗಾಗಿ ಸಿನಿರಸಿಕರು ದರ್ಶನ್ ಸಿನಿಮಾಗಾಗಿ ಕಾಯುತ್ತಿದ್ದಾರೆ.. ಅಷ್ಟೆ ಅಲ್ಲದೆ ಡಿ ಬಾಸ್ ಬರ್ತಡೇಗೆ  ಅಭಿಮಾನಿಗಳು ಸಾಕಷ್ಟು ಸಿದ್ದತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ..

ಚಾಲೆಂಜಿಂಗ್ ಸ್ಟಾರ್, ಬಾಕ್ಸ್ ಆಫೀಸ್ ಸುಲ್ತಾನ್ ದರ್ಶನ್ ಅಭಿನಯದ 'ಯಜಮಾನ' ಚಿತ್ರದ ಟ್ರೈಲರ್ ಹಾಗೂ 4 ಹಾಡುಗಳು ಬಿಡುಗಡೆಯಾಗಿದ್ದು, ಯೂಟ್ಯೂಬ್ ನಲ್ಲಿ ಭಾರಿ ಸದ್ದು ಮಾಡುತ್ತಿವೆ. ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿರುವ ಚೇತನ್ ಕುಮಾರ್ ಸಾಹಿತ್ಯವಿರುವ "ಶಿವನಂದಿ..." , ಕವಿರಾಜ್ ಬರೆದಿರುವ "ಒಂದು ಮುಂಜಾನೆ...", ಸಂತೋಷ್ ಆನಂದರಾಮ್ ಅವರ "ಯಜಮಾನ" ಟೈಟಲ್ ಹಾಡು ಹಾಗೂ ಯೋಗರಾಜ್ ಭಟ್ಟರ "ಬಸಣಿ..." ಹಾಡುಗಳು ಜನಪ್ರಿಯವಾಗಿವೆ.ಇದೇ ಹಿನ್ನಲೆಯಲ್ಲಿ ಸಿನಿಮಾದ ಟ್ರೇಲರ್ ನೋಡಿದ ಅಭಿಮಾನಿಗಳಿಗೆ ದಾಸ ಧನ್ಯವಾದ ತಿಳಿಸಿದ್ದಾರೆ. ಈ ಸಿನಿಮಾ ಮಾರ್ಚ್ 1 ಕ್ಕೆ ಬಿಡುಗಡೆಯಾಗುವುದು ಬಹುತೇಕ ಖಚಿತವಾಗಿದೆ. ಟ್ರೇಲರ್ ನೋಡಿದ್ರೆ ಇದು ಪಕ್ಕಾ ಮಾಸ್ ಸಿನಿಮಾ ಅನ್ನೋದು ಗೊತ್ತಾಗುತ್ತದೆ..ಕೇವಲ ಅಭಿಮಾನಿಗಳಿಷ್ಟೆ ಅಲ್ಲದೆ ಚಿತ್ರದ ನಾಯಕಿ ರಶ್ಮಿಕಾ ಅವರಿಗೂ ಕೂಡ ಧನ್ಯವಾದ ತಿಳಿಸಿದ್ದಾರೆ. ನಿಮ್ಮ ಬೆಂಬಲ ಮತ್ತು ಪ್ರೀತಿಗೆ ಧನ್ಯವಾದಗಳು ಎಂದು ತಿಳಿಸಿದ್ದಾರೆ. ಈ ಟ್ವೀಟ್  ನೋಡಿದ ರಶ್ಮಿಕಾ ನಿಮ್ಮ ಜೊತೆ ಕೆಲಸ ಮಾಡಿ ನನಗೂ ಖುಷಿಯಾಗಿದೆ ಅಂದಿದ್ದಾರೆ. ಇದರಿಂದ ರಶ್ಮಿಕಾ ಪುಲ್ ಖುಷಿಯಾಗಿದ್ದಾರೆ ಒಂದೂವರೆ ವರ್ಷದ ನಂತರ ದರ್ಶನ್ ಸಿನಿಮಾ ಬಿಡುಗಡೆಯಾಗುತ್ತಿದೆ.. ಅಭಿಮಾನಿಗಳು ಯಜಮಾನನಿಗಾಗಿ ಕಾಯುತ್ತಿದ್ದಾರೆ.

Edited By

Manjula M

Reported By

Manjula M

Comments