ಬೆಳ್ಳಂದೂರು ಕೆರೆಯ ಬಳಿ ರಶ್ಮಿಕಾ ಮಂದಣ್ಣ ಏನ್ ಮಾಡ್ತಿದ್ದಾರೆ..?!
ಬೆಂಗಳೂರಿನಲ್ಲಿರುವ ಕೆರೆಗಳು ಎಷ್ಟು ಕಲುಷಿತಗೊಂಡಿವೆ ಮಲೀನದಿಂದ ಕೂಡಿವೆ ಎಂದು ತಿಳಿಯಬೇಕಾದರೆ ಬೆಳಂದೂರು ಕೆರೆ ನೋಡಿದರೆ ಸಾಕು. ಬೆಳಂದೂರು ಕೆರೆಯ ಆತಂಕಕಾರಿ ಸ್ಥಿತಿಯ ಬಗ್ಗೆ ರಾಷ್ಟ್ರಮಟ್ಟದಲ್ಲೇ ಸಾಕಷ್ಟು ಚರ್ಚೆಗಳಾಗಿತ್ತು. ನೊರೆ ಯಾವಾಗಲೂ ಕಾಣಿಸಿಕೊಳ್ಳುತ್ತಲೆ ಇರುತ್ತದೆ.
ಇದೀಗ ಆ ವಿಷಕಾರಿ ನೊರೆ ಹೊರಹಾಕುವ ಕೆರೆಯ ಪಕ್ಕದಲ್ಲೇ ರಶ್ಮಿಕಾ ಮಂದಣ್ಣ ಫೋಟೋ ಶೂಟ್’ವೊಂದನ್ನು ಮಾಡಿಸಿದ್ದಾರೆ. ರಶ್ಮಿಕಾಗೆ ಇಲ್ಲೇನು ಕೆಲಸ ಅಂತ ಯೋಚನೆ ಮಾಡುತ್ತಿದ್ಧೀರಾ..? ಕೆರೆಗಳ ಮಾಲಿನ್ಯದ ಬಗ್ಗೆ ಜಾಗೃತಿ ಮೂಡಿಸಲು ಫೋಟೋ ಶೂಟ್ ಒಂದರಲ್ಲಿ ರಶ್ಮಿಕಾ ಭಾಗಿಯಾಗಿದ್ದಾರೆ. ಸನ್ಮತಿ ಪ್ರಸಾದ್ ಎಂಬವರು ಈ ಫೋಟೋ ಶೂಟ್ ನ ನಿರ್ದೇಶಕರಾಗಿದ್ದು ಈ ಫೋಟೋ ಶೂಟ್ ನ ಫೋಟೋಗಳನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಹರಿಯಬಿಟ್ಟಿರುವ ರಶ್ಮಿಕಾ ಕೆರೆಯ ಸ್ಥಿತಿ ನೋಡಿ ನಿಜಕ್ಕೂ ದುಃಖವಾಯಿತು ಎಂದು ಬರೆದುಕೊಂಡಿದ್ದಾರೆ.ಇನ್ನೂ ಮುಂದಾದರೂ ಕೆರೆಯ ಅಭಿವೃದ್ಧಿಯತ್ತ ಗಮನ ಹರಿಸಬೇಕು..
Comments