Report Abuse
Are you sure you want to report this news ? Please tell us why ?
ನಟ ಜಗ್ಗೇಶ್ ಪುತ್ರನಿಗೆ ಚಾಕುವಿನಿಂದ ಇರಿತ

14 Aug 2017 9:39 AM | Entertainment
548
Report
ಖ್ಯಾತ ನಟ ಜಗ್ಗೇಶ್ ಅವರ ಮೊದಲ ಪುತ್ರ ಗುರುರಾಜ್ ಅವರಿಗೆ ಚಾಕುವಿನಿಂದ ಇರಿದ ಘಟನೆ ಬೆಂಗಳೂರು ಆರ್.ಟಿ. ನಗರದಲ್ಲಿ ನಡೆದಿದೆ.ಮಗುವನ್ನು ಶಾಲೆಗೆ ಬಿಡಲು ಗುರುರಾಜ್ ಹೋಗಿದ್ದ ಸಂದರ್ಭದಲ್ಲಿ ಅತಿವೇಗವಾಗಿ ಬಂದ ದುಷ್ಕರ್ಮಿಗಳು ಕಿರಿಕ್ ಮಾಡಿದ್ದಾರೆ.ಆಗ ನಡೆದ ಜಗಳದಲ್ಲಿ ಗುರುರಾಜ್ ಅವರ ಕಾಲಿಗೆ ಚಾಕುವಿನಿಂದ ಇರಿದು ದುಷ್ಕರ್ಮಿಗಳು ಪರಾರಿಯಾಗಿದ್ದಾರೆ. ಗುರುರಾಜ್ ಅವರ ತೊಡೆ ಭಾಗಕ್ಕೆ ಗಾಯವಾಗಿದ್ದು, ಅವರನ್ನು ಆಸ್ಪತ್ರೆಗೆ ಸೇರಿಸಲಾಗಿದೆ.
ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಜಗ್ಗೇಶ್ ಅವರು ಆಸ್ಪತ್ರೆಗೆ ಭೇಟಿ ನೀಡಿದ್ದಾರೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗಿದೆ.

Edited By
Suhas Test

Comments